Posts

ಬಾಲ್ಯದ ಆ ದಿನಗಳು (Baalyada Aa Dinagalu by Nikhil GM Gowda

Image
😘😍ನೋಡ ನೋಡ ಎಂತ ಚಂದ ಅಲಾ ಬಾಲ್ಯದ ದಿನಗಳು😍😘 ನಮ್ಮ ಬಾಲ್ಯದ ನೆನಪುಗಳು ಅವಿಸ್ಮರಣೀಯ,ಅಮೂಲ್ಯ, ಆನಂದಕರ,ಅಧ್ಬುತ..... ಹೌದು ನಮ್ಮ ಆ ದಿನಗಳು ತುಂಬಾ ಚೆನ್ನಾಗಿತ್ತು ,  ಬಾಲ್ಯ ಮನುಷ್ಯ ಜೀವನದ ಒಂದು ಸುಂದರ ಅನುಭವ. ದೈನಂದಿನ ಜೀವನದಲ್ಲಿ ಮಾನವ ಒಂದು ಯಂತ್ರದಂತೆ ಕಾರ್ಯ ನಿರ್ವಹಿಸುತ್ತಾ ಹೋಗುತ್ತಾನಾದರೂ ನಡು ನಡುವೆ ಏನೋ ಒಂದನ್ನು ಕಳೆದುಕೊಂಡಂತೆ ಭಾಸವಾಗುತ್ತಿರುತ್ತದೆ, ಆದರೆ, ಬಾಲ್ಯ ಇದಾವುದರ ಪರಿವೆಯೇ ಇರದ ಒಂದು ಸ್ವಚ್ಛಂದ ಜೀವನ. ಅದಕ್ಕೆ ಯಾವುದರ ಚಿಂತೆಯು ಕಾಡದು. ಅದಕ್ಕೆ ಆಹಾರ ದಕ್ಕಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ದುಡಿಯಬೇಕಾದ ದರ್ದು ಇಲ್ಲ. ಆರಾಮವಾಗಿದ್ದುಕೊಂಡು ತಿಂದುಂಡು ಮಲಗಿ ಆಟವಾಡುತ್ತ ಕಾಲಕಳೆದು ಬಿಡುವ ವಯೋಮಾನವದು.... ನೋಡ್ರೀ ಸಾರ್ ನಮ್ಮೂರಲ್ ನಾನೇ ರಾಜ , ನಮ್ ಚಡ್ಡಿ ದೋಸ್ತ್ ಗಳ ಜೊತೆಗೆ ಆಡೋದೇ ಮಜ.... ನಿಜವಾಗ್ಲೂ ಕಣ್ರೀ ಆ ಲೈಫ್ ಎಷ್ಟು ಚಂದ ಅಂದ್ರೆ ಒಂದೆರಡು ಪದಗಳಿಂದ ವರ್ಣಿಸಲು ಆಗಲ್ರೀ.... ನಾನ್ ಚಿಕ್ಕವನಿದ್ದಾಗ ನಮ್ ಬಸವಾನಿ ಶಾಲೆಲ್ ಆಡೋ ಆ ಜಾರೋ ಬಂಡಿ , ಕಳ್ಳ ಪೋಲೀಸ್,ರಾಮನ್ ಚಂಡು ಬೀಮನ್ ಚಂಡು, ಲಗೋರಿ ಹೀಗೆ ಹತ್ತು ಹಲವಾರು ಆಟ ಆಡ್ತಾ ಇದ್ವಿ ಆದ್ರೆ ಈಗ ಈ ಪಬ್ಜಿ , ಲೂಡೋ,ಮಿನಿ ಮಿಲೀಶಿಯಾನೋ ಮಲೇಶಿಯಾನೋ ಅಂತ ಆಟದಲ್ ಈಗಿನ್ ಕಾಲದ್ ಹುಡ್ಗುರ್ ಫುಲ್ ಬ್ಯುಸಿ..... ಆ ಕಾಲದಲ್ ನಾವೆಲ್ಲಾ ನಮ್ ಚಡ್ಡಿ ದೋಸ್ತ್ ಗಳ್ ಜೊತೆಗಲ್ಲಾ ನಮ್ಮೂರು ಗುರುವಳ್ಳಿಯಿಂದ ಬಸವಾನಿ ಸ್ಕೂಲಿಗ್ ಹೋಗೋವಾಗ ನಮ...

ಅವಳು ಮತ್ತು ಪ್ರೀತಿ (Avalu mattu preethi ) by Sandeep Kundadri

Image
#ಅವಳು ಮತ್ತು ಪ್ರೀತಿ  ಪ್ರತಿದಿನದಂತೆ ಆ ದಿ‌‌ನ ಹೃದಯದಿಂದ ರಕ್ತಗಳು ನರಗಳ ರಸ್ತೆಯ ಮೂಲಕ ದೇಹದ ಪ್ರತಿಯೊಂದು ಭಾಗಗಳ ಕಾರ್ಯ ವೈಖರಿಯ ಗಮನಿಸಲು ಗಸ್ತು ತಿರುಗಿ ಹೃದಯಕೆ ಹಿಂದಿರುಗುವಾಗ, ಮನಸ್ಸು ಯಾಕೋ ಏನೋ ಕೈಕಟ್ಟಿ ಹೃದಯದ ಹೊಸ್ತಿಲ ಮೇಲೆ ಕುಳಿತು, ತುಂಬಿದ ಕಂಗಳ ಸಹಿತ ಹೃದಯ ಬಾಗಿಲ ನೀಲಗಳಿಗೆ ತಲೆಯವರಗಿ ನೆನಪಿನ ಮೌನದಲೆಗಳ ಮೊರೆತದ ನೋವು ತಾಳಲಾಗದೆ, ಮೌನದ ಅಳು ಎದೆಯ ಮೇಲೆ ಮಲಗಿತ್ತು.  ಸುಯ್ಯ್ ಎಂದು ಗಸ್ತು ತಿರುಗಿ ಬರುತ್ತಿದ್ದ ರಕ್ತವೊಂದು ಈ ದೃಶ್ಯವನ್ನೊಮ್ಮೆ ಕಂಡು ದಿಗ್ಭ್ರಾಂತಿಗೊಳಗಾಗಿ ಒಂದು ಕ್ಷಣ ನಿಂತು ಅರೆ ಮನಸ್ಸಿಗೇನಾಗಿದೆ ದಿನದಂತೆ ಲವಲವಿಕೆಯಿಂದಿಲ್ಲ ಏನಾಗಿರಬಹುದೆಂದು ಎಲ್ಲ ವಾಸ್ತವಗಳ ಗಮನಿಸಿ ಈ ವಿಷಯವ ಹಿಡಿದು ಅವಸರಾವಸರವಾಗಿ ಓಡಿ ಜಲಪಾತದಂತೆ ಹೃದಯಕೆ ಧುಮುಕಿತು. ಅದಾಗಲೆ ದೇಹದ ಪ್ರತಿಯೊಂದು ಭಾಗದಿಂದಲೂ ಬಂದ ರಕ್ತಗಳ ಗುಂಪು ಏನೋ ಗುಸುಗುಸು ಮಾತಾನಾಡುತ್ತಿದ್ದವು... ಇಲ್ಲಿ ನಡೆದಿರುವ ಪ್ರಸಂಗಗಳ ಬಗ್ಗೆ ತಲೆಕೆಡಿಸಿಕೊಂಡು ವಿಸ್ಮಯದ ಏನೋ ದೂರನ್ನ ಹಿಡಿದು ಹೃದಯದ ಪ್ರತಿಯೊಂದು ಕೋಣೆಗಳ ಕದ ತೆಗೆದು ಒಲವದೇವಿಗಾಗಿ ಹುಡುಕಲಾರಂಭಿಸಿತು... ಹೀಗೆ ಹುಡುಕುವಾಗ   ಹೃದಯದ ಎಡ ಅಭಿದಮನಿಯಲ್ಲಿ ಒಲವ ದೇವತೆ ರತ್ನಖಚಿತ  ಪ್ರೀತಿ, ವಿಶ್ವಾಸದ ಸಿಂಹಾಸನದಲ್ಲಿ ಆಸೀನಳಾಗಿದ್ದಳು.  ರಕ್ತ ಹೋಗಿ ವಂದನೆ ಸಲ್ಲಿಸಿ ತಾನು ತಂದ ವರದಿಯ ದೂರನ್ನು ವಚನಿಸಿದಾಗ ಒಲವ ದೇವಿ ಒಮ್ಮೆ ಕಂಪಿಸಿದಳು... ನಂತರ ಈಗಿಂದ ಈಗಲೇ ಬಲಅಪದಮನಿಯ ವಿಚಾರಣ...

ಮಲೆನಾಡು (Malenadu) Akshay Bhat Thirthahalli

Image
*ಮಲೆನಾಡು* ಸ್ವರ್ಗಕ್ಕೂ ಮಿಗಿಲಾದ ಸುಂದರ ಪ್ರಕೃತಿ ಹೊಂದಿರುವುದು ನಮ್ಮ ಮಲೆನಾಡು ಸ್ವರ್ಗವೇ ಧರೆಗಿಳಿದು ಬಂದಂತೆ ಕಾಣುವುದು ನಮ್ಮ ಮಲೆನಾಡು ಎತ್ತ ಸಾಗಿದರು ಸುತ್ತಲು ಹಚ್ಚ ಹಸಿರಿನ ಕಾಡು ಕಾಡು ಮಧ್ಯದಲ್ಲಿ ಜನ ಸಾಮಾನ್ಯರ ಪುಟ್ಟಗೂಡು ತೋಟ ಗದ್ದೆಗಳೇ ಅವರಿಗೆ ಹೊಟ್ಟೆಪಾಡು ಗದ್ದೆ ತಿನ್ನಲು ಬಂದಾಗ ರಾತ್ರಿಯಲ್ಲಿ ಶಿಕಾರಿಗೆ ಹುಡುಕುವರು ಪ್ರಾಣಿಗಳ ಜಾಡು ಇದುವೇ ನಮ್ಮ ಮಲೆನಾಡು ಇದು ನಮ್ಮ ಮಲೆನಾಡು. ಮಲೆನಾಡಿಗರ ಜೀವಜಲ ತುಂಗಾ ನದಿ ಹಲವು ಪುಣ್ಯಕ್ಷೇತ್ರ ಗಳಿರುವುದು ಅದರ ಬದಿ ವರ್ಷಕ್ಕೊಮ್ಮೆ ಆಗುವುದು ಪುಣ್ಯಕ್ಷೇತ್ರಗಳಲಿ ಜಾತ್ರೆ ನೋಡಬರುವರು ಜನರು ದೇವರ ರಥದ ಯಾತ್ರೆ ಸಂಸ್ಕೃತಿ ಸಾಹಿತ್ಯ ಸಂಸ್ಕಾರಕ್ಕೆ ಮಲೆನಾಡು ಅಕ್ಷಯ ಪಾತ್ರೆ  ಇಲ್ಲಿನ ಸೊಬಗ ಸವಿಯ ಬಂದವರಿಗೆ ಸಿಗುವುದು ಕಹಿಯಲ್ಲ ಸಿಹಿಯ ಮಾತ್ರೆ  ಇದುವೇ ನಮ್ಮ ಮಲೆನಾಡು ಇದು ನಮ್ಮ ಮಲೆನಾಡು.      Akshay bhat gl thirthahalli

ನಮ್ ಹಳ್ಳಿ ಲೈಫ್ (Namm Halli Life ) by Nikhil . GM. Gowda

Image
ನೋಡ ನೋಡ ನಮ್ ಹಳ್ಳಿ ಲೈಪ್ ಎಷ್ಟ್ ಚಂದ ಅಲಾ... ಡಿಯರ್ ಪ್ರೆಂಡ್ಸ್,  ಗ್ರಾಮೀಣ ಬದುಕು ಬಹಳವಾಗಿ ಬದಲಾಯಿಸಿದೆ.ಅಭಿವೃದ್ಧಿ ಗಳಿಂದ ಹಳ್ಳಿಗಳಲ್ಲೂ ಸುಖಜೀವನ ಸಾಧ್ಯವಾಗುತ್ತಿದೆ. ಹಳ್ಳಿಗಳಲ್ಲಿ ಉಸಿರುಕಟ್ಟಿಸುವ ವಾಹನ ದಟ್ಟಣೆ ಇಲ್ಲ. ವಾಯು ಮಾಲಿನ್ಯವಿಲ್ಲ.... ನಮ್ ಕೂಲ್ ಕೂಲ್ ಹಳ್ಳಿ ಲೈಫ್ ಚಂದ ಕಣ್ರೀ...   ಡೆವಲಪ್ಮೆಂಟ್ ಡೆವಲಪ್ಮೆಂಟ್, ಡೆವಲಪ್ಮೆಂಟ್.... ನಮ್ ಹಳ್ಳಿಯ ರೋಡ್ ಗಳಲ್ಲಿ ವೆಹಿಕಲ್ ಗಳು  ಹೆಚ್ಚಿದೆ. ಹಳ್ಳಿಯ ಎಲ್ಲಾ ಮನೆಗಳಲ್ಲಿ ಕಾರು ಬೈಕ್ ಗಳು.  ಜನಸಾಮಾನ್ಯರ ಓಡಾಟಕ್ಕೆ ಕೂಡ ಹಳ್ಳಿ ಊರುಗಳಿಗೆ ಬಸ್ಸುಗಳ ಸಂಚಾರ ಹೆಚ್ಚಿದೆ,  ನಮ್ಮೂರಿನ ಸಹಕಾರ ಸಾರಿಗೆ, ಸಹ್ಯಾದ್ರಿ ಬಸ್ ನಂತೆ....  ಈಗಂತೂ ಬಿಡ್ರೀ ಬೌನ್ಸ್ ಬೈಕ್ ಬಂದಿದಾವೆ  ಬುಕ್ ಕರೋ ರೈಡ್ ಕರೋ😂😂 (ಸದ್ಯದಲ್ಲೇ ಶಿವಮೊಗ್ಗದಲ್ಲಿ) ಅದಲ್ಲದೆ ಗೂಡ್ಸ್ , ಆಟೋ, ಪಿಕಪ್ ಗಳು ಸರಕು ಸಾಗಣೆಗೆ ದೊರೆಯುತ್ತಿವೆ.   ಪ್ರತೀ ಊರಿನಲ್ಲಿ ಶುರುವಾಗಿರುವ ಖಾಸಗಿ ಇಂಗ್ಲಿಷ್‌ ಮಾಧ್ಯಮದ ಶಾಲೆಗಳು ಮತ್ತು ವಿಸ್ತೃತವಾಗಿ ದೊರೆಯುತ್ತಿರುವ ಕಾಲೇಜ್‌ ವಿದ್ಯಾಭ್ಯಾಸ, ಹಳ್ಳಿಯ ಪ್ರತಿಯೊಬ್ಬ ತಂದೆ ತಾಯಿಯರು ಕೂಡ ‘ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು’ ಎಂದು ಡಿಸೈಡ್ ಮಾಡಿರ್ತಾರೆ, ಇತ್ತೀಚೆಗೆ ನಾನು ನೋಡಿದ ಹಾಗೆ ಈ ನಮ್ಮ ಸರ್ಕಾರಿ ಶಾಲೆಗಳಲ್ಲಿ ಕಾಡಾ ಕ್ಯಾಬ್ ವ್ಯವಸ್ಥೆ ಮಾಡಿದ್ದಾರೆ ಡೈಲಿ ಯೂನಿಫಾರಂ ಹಾಕಿಕೊಂಡು ಕ್ಯಾಬ್ ನಲ್ಲಿ ಅಥವಾ ನಮ್ ಲೋಕಲ್ ಬಸ್ಸುಗಳಲ್ಲಿ ಶಾಲೆಗೆ ಹೊರಡುತ್ತ...

ಮಲೆನಾಡು(Malenadu ) by Nikhil GM gowda

Image
ಮಲೆನಾಡು...... ನಮ್ಮ ಮಲೆನಾಡು, ಹಚ್ಚ ಹಸಿರಿನ ನಾಡು, ಅದುವೇ ನಮ್ಮೂರು.... ನಮ್ಮ ಮಲೆನಾಡು, ಹಚ್ಚ ಹಸಿರಿನ  ಅದುವೇ ನಮ್ಮೂರು.... ಹೌದು ಸದಾ ಸೌಂದರ್ಯವನ್ನು , ಹಚ್ಚ ಹಸಿರಿನ ತಾಣ ವನ್ನು, ಮನ ಮೋಹಿಸುವ ಪ್ರದೇಶಗಳನ್ನು ಹೊಂದಿರುವುದು ನಮ್ಮ ಮಲೆನಾಡು  ಎಂದೆಂದೂ ತನ್ನ ಸೌಂದರ್ಯವನ್ನು ಕಳೆದುಕೊಳ್ಳದ ನಮ್ಮ ಮಲೆನಾಡು ಸದಾ ನಗುತ್ತಾ ಪ್ರವಾಸಿಗರನ್ನು ಸೆಳೆಯುತ್ತದೆ ಹಾಗೂ ಈ ಮಲೆನಾಡು ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ. ಸಾಗರ, ಚಿಕ್ಕಮಗಳೂರು, ತೀರ್ಥಹಳ್ಳಿ, ಮೂಡಿಗೆರೆ, ಸಕಲೇಶಪುರ, ಶಿರಸಿ, ಮಡಿಕೇರಿ, ಶೃಂಗೇರಿ, ಕೊಪ್ಪ,ನರಸಿಂಹರಾಜಪುರ  ಈ ಪ್ರದೇಶದ ಮುಖ್ಯ ಜಾಗಗಳು, ಹೀಗೆ ಸದಾ ಪ್ರವಾಸಿಗರನ್ನು ಆಕರ್ಷಿಸುವ ನಮ್ಮ ಮಲೆನಾಡು ನನ್ನೂರು ಎನ್ನುವುದು ನಮ್ಮ ಹೆಮ್ಮೆ........ ಇಂತಿ ನಿಮ್ಮವ..... ನಿಖಿಲ್ ಜಿ.ಎಂ ಗೌಡ

ಮಾಯ ಜಿಂಕೆ (Maaya Jinke)

Image
#ಮಾಯಜಿಂಕೆ ಪುಟ್ಟಗೌರಿ ಇಲ್ಲದ ಕಾಲದಲ್ಲಿ, ಕರೆಂಟ್ ಇಲ್ದೆ ಚಿಮ್ಣಿ ಬುಡ್ಡಿ ದೀಪ ಉರೀತಿದ್ದ ಕಾಲದಲ್ಲಿ.ಮನೆ ಗಂಡಾಳುಗಳು "ಏಳ ನಿದ್ರೆ ಬರಲ್ಲ ಕಾಡ್ ಸುತ್ತಾಡ್ಕುಂಡ್ ಬರನ.ಎಂತಾರ್ ಸಿಗ್ತದ ನೋಡನ" ಅಂತ ಕೋವಿ ರೆಡಿ ಮಾಡ್ಕೊತಿದ್ರೆ.ಇತ್ತ ಇನ್ನೊಂದು ಕಡೆ ಕೋವಿ ಕಂಡವರೆ ದೊಡ್ಡಪ್ಪ ಶಿಕಾರಿ ಕಥೆ ಹೇಳಲು ಶುರು.  "ಅಲ್ ಉಂದ್ ಹಂದಿ ಹೊಡ್ದಿದ್ದು ಕ್ವಿಂಟಲ್ ಆಗಿತ್ತು.   ಮಾಂಸ ಅಂದ್ರೆ ಥೇಟ್ ತುಪ್ಪ ಸುರ್ದಂಗ್ ಎಣ್ಣೆ ಸುರೀದು"  ಅವರ ಮಾತಿಗೆ ಮರುಮಾತಾಗಿ.  " ಅದೆಂತದು ನಾ ಉಂದ್ ಹೊಡ್ದಿದ್ದೆ. ಕನಿಷ್ಠ ಅಂದ್ರು ಈಗಿನ್ ತೋಟ ಕೋವಿಲ್ ಲೆಕ್ಕ ಹಾಕುದಾರ್ ಉಂದ್ 10 ತೋಟ ಬೇಕೇನ್, ಅದು ಸಾಮಾನ್ಯ ಒಂದ್ ಕ್ವಿಂಟಲ್ ಮೇಲಾಗುದು"ಅಂತ ಅಪ್ಪನ ಮಾತು.  " ಆ ಹಂದಿನ ಗುಡ್ಡುದ್ ತಲೆಯಿಂದ ನಾ ಒಬ್ನೆ ಹೊತ್ತಿದ್ದೆ" ಅಂತ ಇನ್ನೊಬ್ರು.  ಹೀಗೆ ಶಿಕಾರಿಗೆ ಹೊರ್ಡೊವರ್ಗು ಚರ್ಚಾ ಸ್ಪರ್ಧೆ ನಡಿತಿದೆ ಅನ್ಸೋದು ನಮ್ಗೆ.ಅದ್ರಲ್ ಎಷ್ಟು ಸುಳ್ಳೋ ಎಷ್ಟು ಸತ್ಯನೋ ಆ ಹಂದಿನೆ ಬಂದು ಹೇಳ್ಬೇಕಷ್ಟೆ.   ನಮ್ಗು ಕಥೆ ಕೇಳೊ ವಯಸ್ಸು ಕೇಳ್ತಿದ್ವಿ. ಹೀಗೆ ಹೇಳಿದ್ ಕಥೆಲಿ ದಯ್ಯದ್ ಶಿಕಾರಿ ಕಥೆ ಇವಾಗ್ಲು ನೆನ್ಪಾಗತ್ತೆ.  ಹಿಂದೆ ಅದೊಂದು ಕಾಲವಿತ್ತಂತೆ.  ಕ್ರಿಸ್ತ ಶಕ, ಕ್ರಿಸ್ತ ಪೂರ್ವ ಅಂತೆಲ್ಲ ಹೇಳ್ದ್ರೆ ನಮ್ ಮಾಲ್ನಾಡೋರಿಗ್ ಗೊಂದಲ ಆಗ್ಬೋದು. So ಸಿಂಪಲ್ಲಾಗ್ ಹೇಳೊ ಪ್ರಯತ್ನ ಮಾಡ್ತೀನಿ.   ನನ್ ಯೋಚನೆ ಪ್ರಕಾರ ನನ್ನಜ್ಜನ ...